ನಗರದ ಸುತ್ತ ವಿವ ನ್ಯೂಸ್ ಚಿತ್ತ
ಹೊಸ ವರ್ಷದಂದು ನಗರದ ಸುತ್ತ ವಿವ ನ್ಯೂಸ್ ತಂಡ ಸಂಚರಿಸಿ ಜನತೆಗೆ ಶುಭಾಶಯ ಕೋರಿತ್ತು.
ಇದೇ ಸಂದರ್ಭದಲ್ಲಿ ಜನತೆಯ ಅದರಲ್ಲೂ ಯುವ ಪೀಳಿಗೆಯ ಜೊತೆಗೆ ಮಾತಿಗಿಳಿದ ವಿವ ನ್ಯೂಸ್ ತಂಡ ಹೊಸ ವರ್ಷದ ಆಶಯಗಳ ಕುರಿತು ಪ್ರಸ್ತಾಪಿಸಿತು.
ಹದಿಹರಯದ ಯುವ ಸಮೂಹ ಈ ವರ್ಷ ಲೇಜಿನೆಸ್ ಆಗಿರದೇ ಕ್ರಿಯೇಟಿವ್ ಆಗಿ ನಾವು ಅಂದ್ಕೊಡಿದ್ದನ್ನು ಸಾಧಿಸಬೇಕು , ಸೋಶಿಯಲ್ ಮೀಡಿಯಾ ಆದಷ್ಟು ಕಡಿಮೆ ಬಳಸ್ತೇವೆ ಎಂದು ಭರವಸೆ ನೀಡಿದ್ರು. ಹಾಯ್ ಎಲ್ರಿಗೂ ಹೊಸ ವರ್ಷದ ಶುಭಾಶಯ ಅಂತ ವಿಶ ಮಾಡಿದ ಧನಂಜಯ್ ನಾನು ಇವತ್ತಿಂದ ಸಿಗರೇಟ್ ಬಿಟ್ ಬಿಡ್ತಿನಿ ಸಾರ್ ಎಂದು ಜೋಶ್ನಿಂದ ಹೇಳಿದ್ದ.
ಅದಕ್ಕೆ ಅವನ ಕಾಲೆಳೇದ ವಿವ ನ್ಯೂಸ್ ಫೆಬ್ರವರಿಯಿಂದ ಬೀಡಿ ಸಿಗರೇಟ್ ತುಟ್ಟಿಯಾಗತ್ತಂತೆ ಅದಕ್ಕೆನಾ ಇವಾಗ್ಲೆ ಬಿಟ್ ಬಿಡ್ಬೇಕು ಅಂತ ಡಿಸಿಷನ್ ಎಂಬ ಪ್ರಶ್ನೆಗೆ ಇಲ್ಲಾ ಸಾರ್ ಇದು ನನ್ನ ಪರ್ಸನಲ್ ತೀರ್ಮಾನ್ ನಾನ್ ಸಿರಟೇಟ್ ಬಿಟ್ ಮೇಲೆ ದರ ಎಷ್ಟಾದ್ರು ಹೆಚ್ಚಾಗೊಗ್ಲಿ ನಂಗೆನೂ ಎಂದು ಚಟಾಕಿ ಹಾರಿಸಿದ.
ಅನೇಕ ಮಹಿಳೆಯರು ಮಂದಿರಗಳಿಗೆ ತೆರಳಿ ಹೊಸ ವರ್ಷ ಸುಗಮವಾಗಿ ಸಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು. ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಚೆನ್ನಾಗಿ ಓದಿ ಅಪ್ಪ ಅಮ್ಮನ ನಿರೀಕ್ಷೆಯನ್ನ ನಾವು ನನಸಾಗಿ ಮಾಡುತ್ತೇವೆ ಎಂದರು.
ಒಟ್ಟಿನಲ್ಲಿ ಹೊಸ ವರ್ಷ 2026 ಸಮಸ್ತ ಓದುರಿಗೆ ನಾಡಿನ ಜನತೆಗೆ ಸುಖ ಸಮೃದ್ಧಿ ತರಲೆಂದು ವಿವ ನ್ಯೂಸ್ ಫ್ಯಾಮಿಲಿ ಹಾರೈಸುತ್ತಿದೆ.
ಇತರೆ ಸುದ್ದಿಗಳು