ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು
27 ವಾರ್ಡ್ ಕೆಟಿಜಿ ನಗರ 14/15 ಕ್ರಾಸ್ ನಲ್ಲಿ ಸುಮಾರು ವರ್ಷಗಳಿಂದ ರಾಜ್ಯ ಕಾಲುವೆ ಇದೆ. ಸುಮಾರು ವರ್ಷಗಳಿಂದ ಈ ಕಾಲುವೆ ಊಳು ಎತ್ತದೆ ಚರಂಡಿ ಸಮತ ನಿರ್ಮಾಣ ಮಾಡಿಲ್ಲ ಆದರೂ ಇದು ದಾವಣಗೆರೆಯ ಸ್ಮಾರ್ಟ್ ಸಿಟಿ ಎಂದು ಗುರುತಿಸಿಕೊಂಡಿರೋದು ವಿಪರ್ಯಾಸವೇ ಸರಿ . ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಅಭಿವೃದ್ಧಿ ಮಾತ್ರ ಜೀರೋ .ಅನೇಕ ಬಾರಿ ಮಹಾನಗರ ಪಾಲಿಕೆ ಕಮಿಷನರ್ ಹಾಗೂ ದಾವಣಗೆರೆ ಜಿಲ್ಲೆಯ ಲೋಕಸಭಾ ಸದಸ್ಯರಾದ ಪ್ರಭಾ ಮಲ್ಲಿಕಾರ್ಜುನ್. ದಾವಣಗೆರೆ ಉಸ್ತುವಾರಿ ಸಚಿವರಾದ ಎಚ್ಎಸ್ ಮಲ್ಲಿಕಾರ್ಜುನ್ ಹಾಗೂ 27ನೇ ವಾರ್ಡಿನ ಶಾಸಕರಾದ ಎಸ್ ಎಸ್ ಮಲ್ಲಿಕಾರ್ಜುನ್ ಇವರಿಗೆ ಅನೇಕ ಬಾರಿ ಮನವಿ ನೀಡಿದ್ದರು ಇಲ್ಲಿಯವರೆಗೆ ಯಾರು ಸ್ಪಂದಿಸಿಲ್ಲ. 27ನೇ ವಾರ್ಡಿನ ಜನರಿಗೆ ಚಿಕ್ಕ ಮಕ್ಕಳಿಗೆ ಹಾಗೂ ವೃದ್ಧರು ಅನೇಕ ಬಾರಿ ಡೆಂಗ್ಯೂ ಜ್ವರಕ್ಕೆ ಇನ್ನೂ ಅನೇಕ ರೋಗಗಳಿಗೆ ತುತ್ತಾಗಿದ್ದಾರೆ. ಇದರ ಬಗ್ಗೆ ಗಮನಕ್ಕೆ ಬಂದರು ಅಧಿಕಾರಿಗಳು ಜಾಣ ಮೌನ ವಹಿಸುತ್ತಿದ್ದಾರೆ . ಈ ರಾಜಾ ಕಾಲುವೆಯ ಅಕ್ಕಪಕ್ಕ ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಹಾಗೂ ಅಂಗನವಾಡಿ ಮತ್ತೆ ಸರ್ಕಾರಿ ವಚನಲಯ (ಗ್ರಂಥಾಲಯ) ಇದ್ದರು ಕರೆಂಟು ನೀಡಲು ಹಿಂದೇಟು ಹಾಕುತ್ತಿದ್ದಾರೆ . ದಯವಿಟ್ಟು ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಬಗೆಹರಿಸಿ ಎಂಬುವುದು ಗ್ರಾಮಸ್ಥರ ಬೇಡಿಕೆ . 27ನೇ ವಾರ್ಡಿನ ಅನೇಕ ಮುಖಂಡರುಗಳು ಇದನ್ನು ವಿರೋದಿಸಿದರೂ ಏನು ಪ್ರಯೋಜನ ಆಗುತ್ತಿಲ್ಲ . ಯಾವ ಅಧಿಕಾರಿಗಳು ಶಾಸಕರು ಸಚಿವರು ಲೋಕಸಭಾ ಸದಸ್ಯರು, ಇವರ ಗೋಳನ್ನು ಕೇಳುತ್ತಿಲ್ಲ. ದಯವಿಟ್ಟು ಇನ್ನಾದರೂ ನಮ್ಮ ಸಮಸ್ಸೆ ಪರಿಹರಿಸಿ ಕೊಡಿ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ .