ಪ್ರಬಲ ಭೂಕಂಪಕ್ಕೆ ತತ್ತರಿಸಿದ ಅಫ್ಘಾನ್! ರಾಷ್ಟ್ರ ರಾಜಧಾನಿಯಲ್ಲೂ ನಡುಕ ಶುರು
ದೆಹಲಿ: ಬಾರಿ ಭೂಕಂಪ ನಿನ್ನೆ ರಾತ್ರಿ ಹಲವು ಕಡೆಗಳಲ್ಲಿ ಸಂಭವಿಸಿದೆ. ಒಂದೆಡೆ ಪ್ರಬಲ ಭೂಕಂಪದಿಂದ ಹಲವರು ಸಾವನಪ್ಪಿದ್ದಾರೆ. ಇತ್ತ ರಾಷ್ಟ್ರ ರಾಜಧಾನಿ ದೆಹಲಿ ಜಮ್ಮು ಕಾಶ್ಮೀರದಲ್ಲೂ ಭೂಕಂಪನದ ಅನುಭವವಾಗಿದೆ. ದೆಹಲಿ, ನೋಯ್ಡಾ ಸೇರಿದಂತೆ ಎನ್ಸಿಆರ್ ಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿ ಶುಕ್ರವಾರ ರಾತ್ರಿ ಭೂಕಂಪನದ ಅನುಭವವಾಗಿದೆ. ಜನರು ಭಯಭೀತರಾಗಿ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ. ನಿನ್ನೆ ರಾತ್ರಿ ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಶುಕ್ರವಾರ ದೆಹಲಿ-ಎನ್ಸಿಆರ್ ಮತ್ತು ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಹಠಾತ್ ಕಂಪನಗಳು ಭೀತಿಯನ್ನು ಉಂಟುಮಾಡಿವೆ. ನೇತಾಡುತ್ತಿದ್ದ ಫ್ಯಾನ್ಗಳು, ಬಲ್ಬ್ಗಳು ಮತ್ತು ಟ್ಯೂಬ್ ಲೈಟ್ಗಳು ತೂಗಾಡುತ್ತಿರುವುದು ಕಂಡುಬಂದಿದೆ. ಭೂಕಂಪಕ್ಕೆ ಬೆಚ್ಚಿ ಬಿದ್ದ ಜನ, 8 ಮಂದಿ ಬಲಿ ಭಾರತೀಯ ಹವಾಮಾನ ಇಲಾಖೆ ಮತ್ತು ಇತರ ಮೂಲಗಳ ಪ್ರಕಾರ, ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.9 ದಾಖಲಾಗಿದೆ. ಕೇಂದ್ರಬಿಂದು ಅಫ್ಘಾನಿಸ್ತಾನದಲ್ಲಿದೆ ಎಂದು ತಿಳಿದುಬಂದಿದೆ. ಅಫ್ಘಾನಿಸ್ತಾನದಲ್ಲಿ ಭೂಕಂಪಕ್ಕೆ 8 ಮಂದಿ ಬಲಿಯಾಗಿದ್ದಾರೆ. ಇತ್ತ ಉತ್ತರ ಭಾರತದಾದ್ಯಂತ ಈ ಕಂಪನದ ಅನುಭವವಾಗಿದೆ. ದೆಹಲಿ, ನೋಯ್ಡಾ, ಗುರುಗ್ರಾಮ್, ಚಂಡೀಗಢ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಉಧಂಪುರ, ಪೂಂಚ್, ಕಾಶ್ಮೀರ ಕಣಿವೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ಕಂಪನ ಅನುಭವಿಸಿದ್ದಾರೆ.
ಇತರೆ ಸುದ್ದಿಗಳು