ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ರಾಜ್ಯದಲ್ಲಿ ನಿಲ್ಲದ ಕೈ ಕುರ್ಚಿ ಕದನ
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 15-12-2025

ರಾಜ್ಯದಲ್ಲಿ ನಿಲ್ಲದ ಕೈ ಕುರ್ಚಿ ಕದನ

ಬೆಳಗಾವಿ ಅಧಿವವೇಶನ ಒಂದೆಡೆಯಾದರೆ ನಾಯಕದ್ವಯರ ಆಪ್ತರ ನಡುವೆ ಮೂಡಿಸಿರುವ ಗೊಂದಲ, ಕುತೂಹಲವೆಂದರೆ ರಾಜ್ಯ ರಾಜಕೀಯದಲ್ಲಿ ಗರಿಗೆದರುತ್ತಿರುವ ಸಂಗತಿ ಮುಖ್ಯಮಂತ್ರಿ ಗಾದಿಯ ಅಧಿಪತಿ.

ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಬಿದ್ದಿರುವ ಕದನದ ಚಂಡು ವಾಪಸ್ ಯಾರ ಮಡಿಲಿಗೆ ಬೀಳಲಿದೆ ಎಂಬುದೇ ಕುತೂಹಲಕ್ಕೆ ಕಾರಣ.

ಅದೇನೆ ಇರಲಿ ವಿವ ನ್ಸೂಸ್ ಈ ಸಮಸ್ಯೆಯನ್ನ ಜನತೆಯ ಮುಂದಿಟ್ಟಾಗ ಬಂದ ವೈವಿದ್ಯಮಯ ಉತ್ತರ ಹೀಗಿದೆ. ರೀ ಸ್ವಾಮಿ ಜನ ಓಟ್ ಹಾಕಿ ಆರಿಸಿ ತಂದಿದ್ದು ಇವರ ಸಿಎಮ್ ಕುರ್ಚಿ ಕಾದಾಟ ಮಾಡ್ಲಿ ಅಂತಾನಾ??

ಅಲ್ರೀ ಗ್ಯಾರಂಟಿ ಅಂತ ಆಸೆ ತೋರ್ಸಿ ಈಗ ಅವರ ಕುರ್ಚಿಗೆನೇ ಗ್ಯಾರಂಟಿ ಇಲ್ಲದಂತಾಗಿದೆ ಅಲ್ರೀ‌‌.

ಸರ್ ನಮಗೆಲ್ಲ ರಾಜಕೀಯ ಬರೋಲ್ಲ ನಮಗೆ ಬೇಕಿರೋದು ನಮ್ಮೂರಲ್ ಸರಿಯಾದ ರಸ್ತೆ ಕುಡಿಯೋಕೆ ನೀರು‌...

ಅಯ್ಯೋ ಬಿಡ್ರಿ ತಿಂಗಳಿಗೆ ಎರಡು ಸಾವಿರ ಬರತ್ತೆ ಅಂದ್ರು ಈಗ ಅದು ಇಲ್ಲ ಇದೂ ಇಲ್ಲ ಏನ್ ಸರ್ಕಾರಾನೋ ಏನೋ..

ಇವೆಲ್ಲ ಜನತೆಯ ಅಭಿಪ್ರಾಯ‌ !!!!!!!!

ಸರಿ ಪುನಃ ಮತ್ತೆ ಕುರ್ಚಿ ವಿಷಯಕ್ಕೆ ಬರೋಣ

ರಾಜ್ಯ ರಾಜಕೀಯದಲ್ಲಿ ಆಡಳಿತ ಪಕ್ಷದ ಅಧಿಪತಿ ಕುರ್ಚಿಯ ಬಿಕ್ಕಟ್ಟು ಪರಿಹರಿಸುವಷ್ಟು ಸಾಧಾರಣವೇನಲ್ಲ . ಇಬ್ಬರು ದಿಗ್ಗಜ ನಾಯಕರುಗಳು ಅವರದೇ ಸಮುದಾಯ, ಪ್ರಬಲ ಬಲಾಬಲ ಹೊಂದಿರುವ ಸಿಎಮ್ ಡಿಸಿಎಮ್ ತಮ್ಮದೇ ವರ್ಚಸ್ಸನ್ನ ಹೊಂದಿದ್ದಾರೆ. ಇಬ್ಬರು ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಎರಡು ಕಣ್ಣುಗಳಿದ್ದಂತೆ.

ಹೈಕಮಾಂಡ್ ನಿರ್ಧಾರ ಮತ್ತು ನಾಯಕದ್ವಯರ ಸುತ್ತಮುತ್ತಲಿನ ವಾತಾವರಣ ಇವೆಲ್ಲವನ್ನು ಪಕ್ಕಕ್ಕಿಟ್ಟು ಪ್ರಜಾಪ್ರಭುತ್ವದ ನಿಯಮದಲ್ಲಿ ಅನುಸರಿಸುವುದಾದರೆ ಇದೊಂದು ಬಗೆಹರಿಸಲಾರದ ಸಮಸ್ಯೆಯೇನಲ್ಲ.

ಪ್ರಜಾಸತ್ತಾತ್ಮಕವಾಗಿ ನೋಡುವುದಾದರೆ ಶಾಸಕಾಂಗ ಪಕ್ಷದ ಸಭೆ ಕರೆದು ಅದರಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಯಾವ ನಾಯಕರ ಪರ ಅತೀ ಹೆಚ್ಚು ಶಾಸಕರ ಮತಗಳಿವೆಯೋ ಅವರನ್ನೇ ಆಡಳಿಯ ಅಧಿಪತಿಯನ್ನಾಗಿ ಮಾಡಬಹುದು.

ಶಾಸಕಾಂಗ ಪಕ್ಷದಲ್ಲಿ ಗೌಪ್ಯ ಮತಗಳನ್ನ ಶಾಸಕರಿಂದ ಪಡೆದಾಗ ಅತ್ತ ಶಾಸಕರ ಅಭಿಪ್ರಾಯ ನಿರುಮ್ಮಳವಾಗಿ ಪಡೆದಂತಾಗುತ್ತದಲ್ಲದೇ ಶಾಸಕರಿಗೂ ಅನಿವಾರ್ಯ ನಾಯಕರ ಮೇಲಿನ ಒತ್ತಡಗಳ ಜಂಜಾಟದಿಂದ ಮುಕ್ತರಾಗಬಹುದಲ್ಲವೇ.

ರಾಜಸ್ಥಾನದಲ್ಲಿ ಕಳೆದ ಬಾರಿ ನಡೆದ ವಿದ್ಯಮಾನ ಈಗ ಕರ್ನಾಟಕ ರಾಜ್ಯ ರಾಜಕೀಯದಲ್ಲೂ ಆವರಿಸಿದೆ.

ರಾಜಸ್ಥಾನದಲ್ಲಿ ಸಿಎಮ್ ಕುರ್ಚಿಗಾಗಿ ಇಬ್ಬರು ನಾಯದ್ವಯರ ಕಾದಾಟಕ್ಕೆ ಹೈ ಕಮಾಂಡ್ ಹೈರಾಣಾಗಿತ್ತು. ಆಗ ಅದನ್ನ ಬಗೆಹರಿಸಿದ್ದು ಈ ಪ್ರಜಾಪ್ರಭುತ್ವದ ನಿಯಮಾವಳಿಯ ಮೂಖೇನ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಡುವೆ ಏರ್ಪಟ್ಟಿದ್ದ ಸಿಎಮ್ ಕುರ್ಚಿ ಕದನ ಶಾಸಕಾಂಗ ಸಭೆಯಲ್ಲಿ ಅಂತಿಮಗೊಂಡಿತು. ಇಬ್ಬರು ನಾಯಕರುಗಳ ಜಂಗೀ ಕುಸ್ತಿಗಳಿಗೆ ಹೈಕಮಾಂಡ್ ಸಹ ಉತ್ತರಿಸಲಾಗದೇ ಕೈ ಕಟ್ಟಿ ಕುಳಿತ್ಥಿತ್ತು. ಆಗ ಶಾಸಕರ ಬಲದಿಂದ ಅಶೋಕ ಗೆಹ್ಲೋಟ್ ತಮ್ಮ ಬಲವನ್ನ ತೋರ್ಪಡಿಸಿ ಸಿಎಮ್ ಗಾದಿ ಅಲಂಕರಿಸಿದ್ದರು. ಕರ್ನಾಟಕದಲ್ಲೂ ಇದೇ ಮಾದರಿಯ ವಿದ್ಯಮಾನಗಳು ನಡೆಯುತ್ತಿದೆ. ಅದಷ್ಟು ಬೇಗ ಕುರ್ಚಿಕದನ ಬಗೆಹರಿದು ರಾಜ್ಯದ ಸಮಗ್ರ ಅಭಿವೃದ್ಧಿಯ ಕಾರ್ಯಚಟುವಟಿಕೆ ಆಗಬೇಕಿದೆ. ಗ್ಯಾರಂಟಿ ಸರ್ಕಾರದ ಯೋಜನೆಗಳು ಅನುಷ್ಠಾನವಾಗಬೇಕಾದರೆ ಕುರ್ಚಿ ಕದನಕ್ಕೆ ಶಾಶ್ವತ ವಿರಾಮ ಸಿಗಬೇಕು. ಇಲ್ಲದಿದ್ದರೆ. ಮುಂದಿನ ಅವಧಿಗೆ ರಾಜ್ಯದ ಜನತೆ ಆಡಳಿತ ಪಕ್ಷವನ್ನ ದೂರವಿಡೋದು ಗ್ಯಾರಂಟಿ.

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 375+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 3425+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 3466+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 3523+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 3625+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 3673+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 3705+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 3749+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 3797+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 3810+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 3884+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 3944+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6165+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6227+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 6278+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 6333+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 6495+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 6523+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 6653+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 6834+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9037+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9202+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9263+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 9435+