ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

 ಶಾಶ್ವತವಾಗಿ  “ಟಿಕ್‌ ಟಿಕ್‌”  ಸದ್ದನ್ನು ನಿಲ್ಲಿಸಲಿದ  HMT”
ವರದಿಗಾರರು : ಮಮತಾ | ಸ್ಥಳ : Bengaluru | ದಿನಾಂಕ : 09-01-2026

ಶಾಶ್ವತವಾಗಿ “ಟಿಕ್‌ ಟಿಕ್‌” ಸದ್ದನ್ನು ನಿಲ್ಲಿಸಲಿದ HMT”

ದಶಕಗಳ ಹಿಂದೆಯೇ ಆತ್ಮನಿರ್ಭರತೆಯ ಕನಸಿನೊಂದಿಗೆ ಆರಂಭವಾಗಿದ್ದ ದೇಶದ ಹೆಮ್ಮೆಯ, ಸರ್ಕಾರಿ ಸ್ವಾಮ್ಯದ ವಾಚ್‌ ತಯಾರಿಕಾ ಕಂಪನಿಯಾದ ಹಿಂದುಸ್ಥಾನ್‌ ಮಷಿನ್‌ ಟೂಲ್ಸ್‌ ಲಿ.(ಎಚ್‌ಎಂಟಿ) ಕೊನೆಗೂ ತನ್ನ ಅಸ್ತಿತ್ವಕ್ಕೆ ತೆರೆ ಎಳೆದುಕೊಳ್ಳಲು ಮುಂದಾಗಿದೆ.

ನೋಂದಣಿ ದಾಖಲೆಗಳಿಂದ ತನ್ನ ವಾಚ್‌ ತಯಾರಿಕಾ ಘಟಕದ ಹೆಸರನ್ನು ರದ್ದುಪಡಿಸುವಂತೆ ಕೋರಿ ಕೇಂದ್ರ ಕಂಪನಿಗಳ ವ್ಯವಹಾರದ ಸಚಿವಾಲಯಕ್ಕೆ ಎಚ್‌ಎಂಟಿ ಪತ್ರ ಬರೆದಿದೆ. ಇದರೊಂದಿಗೆ ಕಂಪನಿ ಪುನರುಜ್ಜೀವನದ ಕನಸಿಗೆ ತೆರೆ ಬಿದ್ದಿದ್ದು, ಇತಿಹಾಸದ ಕೊಂಡಿಯೊಂದು ಕಳಚುವ ಸಮಯ ಸನ್ನಿಹಿತವಾಗಿದೆ.

2016ರ ಜ.6ರಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು(ಸಿಸಿಇಎ), ಎಚ್‌ಎಂಟಿಯ 3 ಅಂಗಸಂಸ್ಥೆಗಳನ್ನು ಮುಚ್ಚಲು ಅನುಮತಿ ನೀಡಿತ್ತು. ಆ ಬಳಿಕ ಅಗತ್ಯ ಔಪಚಾರಿಕತೆಗಳನ್ನೆಲ್ಲಾ ಪೂರೈಸಿದ್ದು, ಇದೀಗ ಅಂತಿಮವಾಗಿ ವಾಚ್‌ ತಯಾರಿಕೆಗೆ ಮಂಗಳ ಹಾಡಿದೆ. ಕೇಂದ್ರ ಸರ್ಕಾರದ ಹಿಂದಿನ ನಿರ್ಧಾರದ ಹೊರತಾಗಿಯೂ ಅದರ ಪುನರುಜ್ಜೀವನ ಆಸೆ ಇತ್ತಾದರೂ, ಅದಕ್ಕೂ ಇದೀಗ ತೆರೆ ಬಿದ್ದಿದೆ.

ಸಂಸ್ಥೆಯ ಇತಿಹಾಸ: 1961ರಲ್ಲಿ ಸರ್ಕಾರಿ ಒಡೆತನದ ಎಚ್‌ಎಂಟಿ ಲಿ. ಮತ್ತು ಜಪಾನ್‌ನ ಸಿಟಿಜನ್‌ ವಾಚ್‌ ಜಂಟಿಯಾಗಿ 'ಎಚ್‌ಎಂಟಿ ವಾಚ್' ಉತ್ಪಾದನೆಯನ್ನು ಆರಂಭಿಸಿದವು. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಈ ಸಂಸ್ಥೆ, ಭಾರತದ ಮೊದಲ ಕೈಗಡಿಯಾರ ತಯಾರಕನಾಗಿ ಹೊರಹೊಮ್ಮಿತ್ತು. ಕೈಗೆಟುಕುವ ದರಗಳಲ್ಲಿ ಲಭ್ಯವಿದ್ದ ಈ ವಾಚ್‌ಗಳು ಭಾರತೀಯರ ಅಚ್ಚುಮೆಚ್ಚಾಗಿದ್ದವು. ಎಚ್‌ಎಂಟಿಯ ವಾಚ್‌ಗಳು ಸರಳ ವಿನ್ಯಾಸವನ್ನು ಹೊಂದಿದ್ದವಾದರೂ, ಬಾಳಿಕೆಗೆ ಹೆಸರುವಾಸಿಯಾಗಿದ್ದವು. ಜನತಾ, ಪೈಲಟ್‌, ಕೊಹಿನೂರ್‌ ಎಚ್‌ಎಂಟಿಯ ಪ್ರಮುಖ ಬ್ರ್ಯಾಂಡ್‌ಗಳಾಗಿದ್ದವು. ಇದುವರೆಗೂ 10 ಕೋಟಿಗೂ ಹೆಚ್ಚಿನ ವಾಚುಗಳು ಮಾರಾಟವಾಗಿರುವ ಅಂದಾಜಿದೆ.

ಸಂಸ್ಥೆಯ ಇತಿಹಾಸ: 1961ರಲ್ಲಿ ಸರ್ಕಾರಿ ಒಡೆತನದ ಎಚ್‌ಎಂಟಿ ಲಿ. ಮತ್ತು ಜಪಾನ್‌ನ ಸಿಟಿಜನ್‌ ವಾಚ್‌ ಜಂಟಿಯಾಗಿ 'ಎಚ್‌ಎಂಟಿ ವಾಚ್' ಉತ್ಪಾದನೆಯನ್ನು ಆರಂಭಿಸಿದವು. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಈ ಸಂಸ್ಥೆ, ಭಾರತದ ಮೊದಲ ಕೈಗಡಿಯಾರ ತಯಾರಕನಾಗಿ ಹೊರಹೊಮ್ಮಿತ್ತು. ಕೈಗೆಟುಕುವ ದರಗಳಲ್ಲಿ ಲಭ್ಯವಿದ್ದ ಈ ವಾಚ್‌ಗಳು ಭಾರತೀಯರ ಅಚ್ಚುಮೆಚ್ಚಾಗಿದ್ದವು. ಎಚ್‌ಎಂಟಿಯ ವಾಚ್‌ಗಳು ಸರಳ ವಿನ್ಯಾಸವನ್ನು ಹೊಂದಿದ್ದವಾದರೂ, ಬಾಳಿಕೆಗೆ ಹೆಸರುವಾಸಿಯಾಗಿದ್ದವು. ಜನತಾ, ಪೈಲಟ್‌, ಕೊಹಿನೂರ್‌ ಎಚ್‌ಎಂಟಿಯ ಪ್ರಮುಖ ಬ್ರ್ಯಾಂಡ್‌ಗಳಾಗಿದ್ದವು. ಇದುವರೆಗೂ 10 ಕೋಟಿಗೂ ಹೆಚ್ಚಿನ ವಾಚುಗಳು ಮಾರಾಟವಾಗಿರುವ ಅಂದಾಜಿದೆ.

ವರ್ಷ ಕಳೆದಂತೆ ಅನೇಕ ವಾಚ್‌ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ 2000ದ ಬಳಿಕ ಎಚ್‌ಎಂಟಿ ಪತನ ಆರಂಭವಾಗಿತ್ತು. ಇದೀಗ ಶಾಶ್ವತವಾಗಿ ತನ್ನ ಟಿಕ್‌ ಟಿಕ್‌ ಸದ್ದನ್ನು ನಿಲ್ಲಿಸಲಿದೆ

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1899+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 2129+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4592+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4770+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4791+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4870+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7349+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7830+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7868+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 13064+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 13187+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13463+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13483+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27451+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30489+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30509+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30538+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33542+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33547+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33669+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33763+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33794+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39340+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39429+