ವೀರಯೋಧ ಲೋಕೇಶ್ ಅವರಿಗೆ ಅಂತಿಮ ನಮನ
ಹೃದಯಾಘಾತದಿಂದ ಬಿಎಸ್ಎಫ್ ಯೋಧನ ದುರ್ಮರಣ – ಸಾರ್ವಜನಿಕರ ಕಣ್ಣೀರಿನ ವಿದಾಯ
ಕೃಷ್ಣರಾಜಪೇಟೆ, ಅ.27: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ (BSF) ಯೋಧರಾಗಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ನಾಗಮಂಗಲ ತಾಲೂಕಿನ ಮೈಲಾರಪಟ್ಟಣದ ಲೋಕೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪಂಜಾಬ್ ರಾಜ್ಯದ ಪಠಾಣ್ ಕೋಠಿನಲ್ಲಿ ಹೃದಯಾಘಾತದಿಂದ ನಿಧನರಾದರು. ವಿಶೇಷ ವಿಮಾನದಲ್ಲಿ ಲೋಕೇಶ್ ಅವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ ಬೆಂಗಳೂರಿಗೆ ತಂದು, ಅಲ್ಲಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಗಡಿ ಭದ್ರತಾ ಪಡೆಯ ವಾಹನದಲ್ಲಿ ಕೃಷ್ಣರಾಜಪೇಟೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಅವರ ಸ್ವಗೃಹಕ್ಕೆ ತರಲಾಯಿತು. ಸಾರ್ವಜನಿಕರ ದರ್ಶನದ ನಂತರ ಶವವನ್ನು ಮೈಲಾರಪಟ್ಟಣಕ್ಕೆ ಕೊಂಡೊಯ್ಯಲಾಯಿತು. ಈ ವೇಳೆ ಶಾಸಕ ಹೆಚ್.ಟಿ. ಮಂಜು, ಕೈಮಗ್ಗ ನಿಗಮದ ಅಧ್ಯಕ್ಷ ಬಿ. ನಾಗೇಂದ್ರ ಕುಮಾರ್, ಲೆ. ಕರ್ನಲ್ ಅಶೋಕ್ ಕುಮಾರ್, ಮಾಜಿ ಶಾಸಕರು ಕೆ.ಬಿ. ಚಂದ್ರಶೇಖರ್, ಬಿ. ಪ್ರಕಾಶ್, ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ಪೊಲೀಸ್ ನಿರೀಕ್ಷಕಿ ಸುಮಾರಾಣಿ, ಸಮಾಜ ಸೇವಕ ಆಲಂಬಾಡಿ ಕಾವಲು ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು. ಲೋಕೇಶ್ ಅವರು ಪತ್ನಿ ಆಶಾ ಹಾಗೂ ಇಬ್ಬರು ಪುತ್ರಿಯರಾದ ಹರ್ಷಿಣಿ (12), ಹರಿಣಿ (7) ಅವರನ್ನು ಅಗಲಿದ್ದಾರೆ. ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಮೈಲಾರಪಟ್ಟಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇತರೆ ಸುದ್ದಿಗಳು