ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ, ಅರಸೀಕೆರೆ – ೭೦ನೇ ಕನ್ನಡ ರಾಜ್ಯೋತ್ಸವ
ಇಂದು ಸಂಘದ ವತಿಯಿಂದ ೭೦ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಂಘಟನಾ ಕಾರ್ಯದರ್ಶಿ ಶ್ರೀ ಕೆ.ಸಿ. ನಟರಾಜ್ ಅವರು ಕನ್ನಡ ಏಕೀಕರಣ ಚಳುವಳಿಯ ಕುರಿತು ಮಾತನಾಡಿದರು. ಅವರು ಕನ್ನಡವನ್ನು “ಒಂದು ನಾಡು, ನುಡಿ, ಜನಾಂಗವನ್ನು ಪ್ರತಿನಿಧಿಸುವ ಅರ್ಥಪೂರ್ಣ ಪದ” ಎಂದಾಗಿ ವಿವರಿಸಿದರು. ಶ್ರೀ ನಟರಾಜ್ ಅವರು ಮುಂದುವರಿದು, ಹೊಸದಾಗಿ ಉದಯಿಸಿದ ಮೈಸೂರು ರಾಜ್ಯಕ್ಕೆ 1973ರ ನವೆಂಬರ್ ೧ ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ ಎಂದು ವಿವರಿಸಿದರು. ಅವರ ಪ್ರಸ್ತಾವನೆ ಪ್ರಕಾರ, ಮಾತೃಭಾಷೆ ಕನ್ನಡವನ್ನು ಹೆತ್ತ ಮಾತೆಯಂತೆ ಗೌರವಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಕನ್ನಡವು ಮನೆಯಲ್ಲಿ ಹಾಗೂ ವ್ಯವಹಾರಿಕ ಬದುಕಿನಲ್ಲಿಯೂ ಬಳಸಲಾಗುವ ಅಗತ್ಯತೆಯನ್ನು ಉದಾಹರಣೆಗಳ ಮೂಲಕ ವಿವರಿಸಿದರು.
ಸಭೆಯ ಅಧ್ಯಕ್ಷರಾಗಿ ಶ್ರೀ ಯೋಗೇಶಪ್ಪ ಅವರು ಮಾತನಾಡಿದರು. ಶ್ರೀ ರಂಗನಾಥಾಚಾರ್ ಸಭೆಯ ನಡಾವಣೆಯ ಬಗ್ಗೆ ಮಾಹಿತಿ ನೀಡಿದರು. ಪ್ರಾರ್ಥನೆ – ಶ್ರೀಮತಿ ಮೀನಾಕ್ಷಮ್ಮ, ಶ್ರೀಮತಿ ವಿನೋದಮ್ಮ, ಮತ್ತು ಶಫಿತ್ ಬೇಗಂ ಸ್ವಾಗತ – ಶ್ರೀ ಪ್ರಭು ವಂದನಾರ್ಪಣೆ – ಶ್ರೀ ಕೃಷ್ಣಪ್ಪ
ಇತರೆ ಸುದ್ದಿಗಳು